ಕುಂತಿ

ಸೂರ್ಯ ಕಂತಿದ್ದಾನೆ ಅವಳು
ದಿನದ ದಗದ ಮುಗಿಸಿ ಹೊರಳುತ್ತಿದ್ದಾಳೆ
ಧೂಳು ಕಾಲುದಾರಿಯಲ್ಲಿ
ಉಸುಕಿನಲ್ಲಿ ಅವಳ ಹೆಜ್ಜೆಗಳು
ಮೂಡುವದಿಲ್ಲ, ಬರೀ ನಿಟ್ಟುಸಿರು ಕೇಳುತ್ತದೆ.

ಮಗಳು ಈ ದಿನ ಯಾಕೋ
ಮಂಕಾಗಿದ್ದಳು ಹಾರಿ ಬರುವ
ಹಗಲ ಬಿಸಿಲಿಗೆ ಹೆದರಿದ್ದಾಳೆ,
ಅಪ್ಪನ ಕಣ್ಣಲ್ಲಿ ನಿಗಿ ನಿಗಿ ಸೂರ್ಯ!
ಉತ್ತರ ಸಿಗದ ಪ್ರಶ್ನೆ ಪತ್ರಿಕೆಗಳು

ಭ್ರಮೆಯಲಿ ನಡುಗೆಯ ಕನಸು
ತೊಯ್ದ ಒರೆಯಲಿ ಗಂಜೀ
ಬೇಯಿಸುವ ಪರಿಪಾಠ, ಮುಳ್ಳು
ತುಂಬಿದ ಕಳ್ಳೀಕಂಠಿ ಓಣಿ
ನದಿಯೊಳಗೆ ಅತ್ತ ಇತ್ತ ತೇಲುವ ದೋಣಿ.

ತಲೆಯಿರುವ ಜಾಗದಲಿ ಹಣ್ಣಾದ
ಕೂದಲು ಗಂಟು, ಮಾಸಿದ ಚಿಕ್ಕೀ ಬಳೆಗಳು
ಹಚ್ಚಾಗಿವೆ ಎದೆಯ ಭಾರ ಪುಟ್ಟೀ
ಒಂಟಿಯಾಗಿ ನಡೆದಿದ್ದಾಳೆ ಕುಂತೀ
ಎಲ್ಲಾ ಸರಿಯುವ ಜಗದ ಪಾಡು.

ಮಕ್ಕಳು ಕಾಲು ತುಂಬ ಬಿಗಿದ ಸರಪಳಿ
ಹಾಲು ಉಣಿಸಿದ ತಟ್ಟೆಯಲಿ ವಿಷ
ಮನೆತುಂಬ ಹರಡಿದ ಹಗೆ ಹೊಗೆ
ಬೀದಿಗೆ ಬಂದು ಹೊರಳಾಡಿದ ಕವಿತೆ
ಕತ್ತಲು ಆಕಾಶದ ಅಂಬರದಲಿ ಚಿಕ್ಕಿಗಳಿಲ್ಲ.

ಒಂಟಿ ಮನೆಯಲಿ ಹೊರಳಾಡಿದ
ಕುಂತಿ ತಾಯಿ ಮನಸ್ಸು ಮರುಗಿತು
ಬೆನ್ನಿಗಂಟಿದ ಯುದ್ಧ ವಾಸನೆ ತಿಳಿ
ಗೇಡಿನ ಕೇಡಿನ ಆಟದಲಿ ಮೈಮರೆತವರು
ಕೇಳಲಿಲ್ಲ ಅವಳ ಹೃದಯದ ಕೂಗು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಗನಿಗೆ
Next post ನಿವೇದನೆ

ಸಣ್ಣ ಕತೆ

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

cheap jordans|wholesale air max|wholesale jordans|wholesale jewelry|wholesale jerseys